*ಜಿಕೆಮಣಿ ಸಾಮಾನ್ಯ ಜ್ಙಾನ*
(-ರೋಷನ್ ಜಗಳೂರು-)
✍2011ರ ಜನಗಣತಿ ಪ್ರಕಾರ ಭಾರತದ ಸರಾಸರಿ ಲಿಂಗಾನುಪಾತವು ಪ್ರತಿ ಸಾವಿರ ಪುರುಷರಿಗೆ 940 ಮಹಿಳೆಯರು.
✍ಕೇರಳ ರಾಜ್ಯವು ಪ್ರತಿ ಸಾವಿರ ಪುರುಷರಿಗೆ 1084 ಸ್ತ್ರೀಯರನ್ನು ಹೊಂದಿದ್ದು ಅತಿ ಹೆಚ್ಚು ಲಿಂಗಾನುಪಾತವನ್ನು ಹೊಂದಿದೆ.
✍ಹರಿಯಾಣ ರಾಜ್ಯವು ಪ್ರತಿ ಸಾವಿರ ಪುರುಷರಿಗೆ 877 ಸ್ತ್ರೀಯರನ್ನು ಹೊಂದಿದ್ದು. ಕಡಿಮೆ ಲಿಂಗಾನುಪಾತವನ್ನು ಹೊಂದಿರುವ ರಾಜ್ಯವಾಗಿದೆ.
✍2011ರ ಜನಗಣತಿ ಪ್ರಕಾರ ಭಾರತದ ಸರಾಸರಿ ಜನಸಾಂದ್ರತೆಯು ಪ್ರತಿ ಚದರ ಕಿ.ಮೀ 382 ಜನರು
✍ಬಿಹಾರವು ಪ್ರತಿ ಚ.ಕಿ.ಮೀ 1102 ಜನರನ್ನು ಹೊಂದಿದ್ದು ಅಧಿಕ ಜನಸಾಂದ್ರತೆಯನ್ನು ಹೊಂದಿರುವ ರಾಜ್ಯವಾಗಿದೆ. ಅರುಣಾಚಲ ಪ್ರದೇಶವು ಪ್ರತಿ ಚ.ಕಿ.ಮೀಗೆ 17 ಜನರನ್ನು ಹೊಂದಿದ್ದು ಅತೀ ಕಡಿಮೆ ಜನಸಾಂದ್ರತೆಯನ್ನು ಹೊಂದಿರುವ ರಾಜ್ಯವಾಗಿದೆ.
✍ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ ಅತಿ ಹೆಚ್ಚು (11297 ) ಜನಸಾಂದ್ರತೆಯನ್ನು ಹೊಂದಿದ್ದರೆ. ಅಂಡಮಾನ್ ನಿಕೋಬಾರ್ ದ್ವೀಪಗಳು ಕಡಿಮೆ (463) ಜನಸಾಂದ್ರತೆಯನ್ನು ಹೊಂದಿವೆ.
✍ಭಾರತವು ಪ್ರಪಂಚದಲ್ಲಿಯೇ ಮೊದಲ ಬಾರಿಗೆ1952ರಲ್ಕಿ ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದ ದೇಶವಾಗಿದೆ.
( ಇದರ ಮುಖ್ಯ ಉದ್ದೇಶ ವಿವಿಧ ವಿಧಾನಗಳಿಂದ ಜನನ ದರವನ್ನು ನಿಯಂತ್ರಿಸುವುದಾಗಿದೆ)
✍2011ರ ಜಾಗತಿಕ ಹಸಿವು ಸೂಚ್ಯಂಕ ವರದಿಯ ಪ್ರಕಾರ ಹಸಿವಿನಿಂದ ಬಳಲುತ್ತಿರುವ ಪ್ರಪಂಚದ ಪ್ರಮುಖ ರಾಷ್ಟ್ರಗಳಲ್ಲಿ ಭಾರತವು 15 ನೇ ಸ್ಥಾನದಲ್ಲಿದೆ.
☄☄☄☄☄☄☄☄
✍ಕೊಹಿನೂರ್ ವಜ್ರದ ಮೂಲ ಈಗಿನ ಆಂದ್ರಪ್ರದೇಶ. ಅದು ಸುಮಾರು 5 ಸಾವಿರ ವರ್ಷಗಳ ಹಿಂದಿಮದ್ದೆಂಬ ನಂಬಿಕೆಯಿದೆ. ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಜಾಂಬವಂತನಿಂದ ಈ ವಜ್ರವನ್ನು ಪಡೆದ ಎಂದು ಅನೇಕ ಕಥೆಗಳಲ್ಲಿ ಉಲ್ಲೇಖವಿದೆ.
✍ಇತಿಹಾಸಕಾರರ ಪ್ರಕಾರ ಕೊಹಿನೂರ್ ವಜ್ರ ಸುಮಾರು 3000 ವರ್ಷಗಳ ಹಿಂದಿನದ್ದು. ಅಂದರೆ ಮಹಾಭಾರತದ ಕಾಲಘಟ್ಟದ್ದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
✍ಈ ವಜ್ರ ಪ್ರಸಿದ್ದಿಗೆ ಬಂದದ್ದು 14ನೇ ಶತಮಾನದಲ್ಲಿ,ಮೂಲದಲ್ಲಿ ಕೊಹಿನೂರ್ ವಜ್ರ ಕಾಕತೀಯ ಅರಸರ ಸೊತ್ತಾಗಿತ್ತು. 1320ರಲ್ಲಿ ಕಾಕತೀಯ ಅರಸರನ್ನು ಸೋಲಿಸಿದ ದೆಹಲಿ ಸುಲ್ತಾನರು ವಜ್ರವನ್ನು ದೆಹಲಿಗೆ ಕೊಂಡ್ಯೋಯ್ದರು. ಕಾಲ ಕ್ರಮೇಣ ಅದು ಮೊಘಲ್ ಚಕ್ರವರ್ತಿ ಬಾಬರ್ ನ ಕೈ ಸೇರಿತು ಎಂದು ಬಾಬರ್ ನಾಮಾ ದಲ್ಲಿ ಉಲ್ಲೇಖವಿದೆ.
✍ನಂತರದಲ್ಲಿ ವಜ್ರ ಮೊಘಲ್ ದೊರೆ ಔರಂಗಜೇಬನ ಸುಪರ್ದಿಗೆ ಸೇರುತ್ತದೆ. ಆತ ನಂತರ ಕೊಹಿನೂರನ್ನು ಲಾಹೋರ್ ದೊರೆಯಾದ ರಣಜಿತ್ ಸಿಂಗ್ ನಿಗೆ ಕಾಣಿಕೆಯಾಗಿ ನೀಡುತ್ತಾನೆ.
✍ಕೊಹಿನರ್ ಪರಂಪರೆಯ ಗೌರವಾರ್ಥವಾಗಿ ತನ್ನ ಕಾಲಾನಂತರದಲ್ಲಿ ವಜ್ರವನ್ನು ಪುರಿ ಜಗನ್ನಾಥ ದೇವಾಲಯಕ್ಕೆ ಕಾಣಿಕೆಯಾಗಿ ನೀಡುವುದಾಗಿ ಉಯಿಲು ಬರೆದಿಡುತ್ತಾನೆ ಆದರೆ 1839ರಲ್ಲಿ ನಡೆದ ಎರಡನೇ ಆಂಗ್ಲೋ ಸಿಖ್ ಯುದ್ದದ ನಂತರ ಲಾರ್ಡ್ ಡಾಲ್ ಹೌಸಿಯು ಮೋಸದ ಒಪ್ಪಂದಕ್ಕೆ ಬಲವಂತವಾಗಿ ಸಹಿ ಪಡೆದುಕೊಳ್ಳುತ್ತಾನೆ. ಈ ಒಪ್ಪಂದದ ಪ್ರಕಾರ ಕೊಹಿನೂರ್ ವಜ್ರವನ್ನು ಬ್ರಿಟನ್ ಅರಸೊತ್ತಿಗೆಗೆ ಕಾಣಿಕೆಯಾಗಿ ನೀಡುವುದಾಗಿ ಲಾಹೋರ್ ಒಪ್ಪಂದದ 3ನೇಯ ವಿಧಿಯಲ್ಲಿ ಮೋಸದಿಂದ ಸೇರಿಸಲಾಗುತ್ತದೆ ಈಗೆ ವಜ್ರ ಬ್ರಿಟೀಷರ ಪಾಲಾಯಿತು.
(ಕೃಪೆ:ಕೊಹಿನೂರ್ ವಜ್ರ ವಿಜಯವಾಣಿ ಸುದ್ದಿ)
☄☄☄☄☄☄☄☄
ಪ್ರಚಲಿತ ಘಟನೆ
✍10 ರಾಜ್ಯಗಳಲ್ಲಿ ತಲೆದೋರಿರುವ ಬರ ಪರಿಸ್ಥಿತಿಯಿಂದಾಗಿ ದೇಶದ ಆರ್ಥಿಕತೆಗೆ ಕನಿಷ್ಟವೆಂದರೂ 6.50 ಲಕ್ಷ ಕೋಟಿಗಳಷ್ಟು ನಷ್ಟವಾಗಲಿದೆ ಎಂದು ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯೋದಮದ ಮಹಾಸಂಘದ (ಅಸೋಚಾಂ) ವರದಿ ಅಂದಾಜಿಸಿದೆ.
✍ಪಿಲಿಪ್ಪೀನ್ಸ್ ದೇಶದ ನೂತನ ಅಧ್ಯಕ್ಷರಾಗಿ ರೋಡ್ರಿಗೋ ಡ್ಯುಟರ್ಟ್ ಆಯ್ಕೆಯಾಗಿದ್ದಾರೆ.
✍ಉಕ್ರೇನ್ ನಿರ್ಮಿತ ಆಂಟೋನೊವ್ ಎಎನ್-225 ಮ್ರಿಯಾ ಎಂಬ ಹೆಸರಿನ ವಿಮಾನವು ಜಗತ್ತಿನಲ್ಲೇ ಅತಿದೊಡ್ಡ ವಿಮಾನ ಎಂಬ ಕೀರ್ತಿಗೆ ಪಾತ್ರವಾಗಿದೆ.
☄☄☄☄☄☄☄☄
✍ಮೌರ್ಯರ ಕಾಲದ ಸಂಘಗಳಲ್ಲಿ ದಿನ ನಿತ್ಯದ ಕೂಲಿಗಾಗಿ ದುಡಿಯುತ್ತಿದ್ದ ಸ್ವತಂತ್ರ ಕಾರ್ಮಿಕರನ್ನು ಭೃತಕರು, ಕರಮಕಾರರು ಎಂದು ಕರೆಯುತ್ತಿದ್ದರು.
✍ಅಂಗ ವ್ಯವಸ್ಥೆಯ ಬಗೆಗಿನ ಅಧ್ಯಯನವನ್ನು ಹಿಸ್ಮಾಲಜಿ ಎನ್ನುವರು.
✍ಇನ್ ಕ್ರೆಡಿಬಲ್ ಇಂಡಿಯಾ ಇದು ಭಾರತೀಯ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯವಾಗಿದೆ.
✍ದ ಲೈವ್ಸ್ ಆಫ್ ಅದರ್ಸ್ ಕೃತಿಯ ಲೇಖಕ ನೀಲ್ ಮುಖರ್ಜಿ.
✍ಮೆಟ್ಟಿಲ ಬಾವಿ 'ರಾಣಿ ಕಿ ವಾವ್ ನ್ನು ವಿಶ್ವ ಪಾರಂಪರಿಕ ತಾಣವೆಂದು ಯುನೆಸ್ಕೋ ಆಯ್ಕೆ ಮಾಡಿದೆ ಈ ತಾಣ ಗುಜರಾತ್ ನಲ್ಲಿದೆ.
✍ದೇವದಾಸಿ ಪದ್ದತಿಯ ಬಗ್ಗೆ ವಿವರ ನೀಡುವ ಮೊದಲ ಶಾಸನ ರಾಮಘರ ಶಾಸನ