Saturday 2 April 2016

ಪೂರ್ಣ ಚಂದ್ರ ತೇಜಸ್ವಿ

👁👁👁👁👁👁👁👁👁
ಕಿರುಗೂರಿನ ಗಯ್ಯಾಳಿಗಳು ಕಥಾ ಸಂಕಲನದ ಕರ್ತೃ ಪೂರ್ಣ ಚಂದ್ರ ತೇಜಸ್ವಿ.. ಇದೀಗ ಈ ‍ಕ‍ಥಾಸಂಕಲನ ಚಲನಚಿತ್ರವಾಗಿದೆ.

ಹಾಗಾಗಿ ಪೂರ್ಣ ಚಂದ್ರ ತೇಜಸ್ವಿ ಅವರು ಕಿರು ಮಾಹಿತಿ ನಿಮಗಾಗಿ:

(ಜಿಕೆಮಣಿ ರೋಷನ್ ಜಗಳೂರು)

👁ಜನನ ಸೆಪ್ಟೆಂಬರ್ 8 1938
ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
👁ಮರಣ ಏಪ್ರಿಲ್ 5 2007
(ತಮ್ಮ ಮನೆ ನಿರುತ್ತರದಲ್ಲಿ)
ಮೂಡಿಗೆರೆ
ಕಾವ್ಯನಾಮ ಪೂಚಂತೇ

👁ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗು ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗು ಸ್ವತಂತ್ರ ಪ್ರವೃತ್ತಿಯ ಬರಹಗಾರರು. ಇವರು 1938 ಸೆಪ್ಟೆಂಬರ್ 8 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. ಇವರ ಮೊದಲ ಕೃತಿ ಲಿಂಗ ಬಂದ. ಈ ಕೃತಿಗಾಗಿ ಅವರು ರಾಜೋತ್ಸವ ಪ್ರಶಸ್ತಿ ಪಡೆದರು.
ಸ್ನಾತಕೊತ್ತರ ಪದವಿಯ ನಂತರ ಒರಗೆಯ ಇತರೆ ಬರಹಗಾರರಂತೆ ಅದ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಸಾಹಿತ್ಯ ಕೃತಿಗಳು

👁ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.

👁ಕಾದಂಬರಿಗಳು
ಕರ್ವಾಲೋ (೧೯೮೦)
ಚಿದಂಬರ ರಹಸ್ಯ (೧೯೮೫)
ಜುಗಾರಿ ಕ್ರಾಸ್ (೧೯೯೪)
ಮಾಯಾಲೋಕ (೨೦೦೫)
ಕಾಡು ಮತ್ತು ಕ್ರೌರ್ಯ (೨೦೧೩

👁ಕಥಾಸಂಕಲನ
ಹುಲಿಯೂರಿನ ಸರಹದ್ದು (೧೯೬೨)
ಅಬಚೂರಿನ ಪೋಸ್ಟಾಫೀಸು (೧೯೭೩)
ಕಿರಿಗೂರಿನ ಗಯ್ಯಾಳಿಗಳು (೧೯೯೧)
ಪಾಕಕ್ರಾಂತಿ ಮತ್ತು ಇತರ ಕತೆಗಳು

👁ನಾಟಕ
ಯಮಳ ಪ್ರಶ್ನೆ (೧೯೬೪)

👁ಆತ್ಮ ಕಥನ
ಅಣ್ಣನ ನೆನಪು (೧೯೯೬) ಕುವೆಂಪು ಅವರ ಕುರಿತು

👁ಪ್ರವಾಸ ಕಥನ
ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್ (೧೯೯೦)
ಪ್ರಶಸ್ತಿಗಳು

👁ಇವರಿಗೆ ಸಂದ ಗೌರವಗಳು
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೭ ರಲ್ಲಿ
ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೭ ರಲ್ಲಿ
ಪಂಪ ಪ್ರಶಸ್ತಿ 2001 ರಲ್ಲಿ
ರಾಜ್ಯೋತ್ಸವ ಪ್ರಶಸ್ತಿ
  ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಸಹ ಅದೇ ವರ್ಷ ತೇಜಸ್ವಿ ಅವರಿಗೆ ಗೌರವ ಪ್ರಶಸ್ತಿ ನೀಡಿದೆ.

👁ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು",
"ತಬರನ ಕಥೆ" ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿವೆ.

    "ಕುಬಿ ಮತ್ತು ಇಯಾಲ" ಚಿತ್ರವು ರಾಜ್ಯ ಪ್ರಶಸ್ತಿ ಗಳಿಸಿತು.
    "ಚಿದಂಬರ ರಹಸ್ಯ" ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ,
1987ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಾಪ್ತವಾಯಿತು.

ಕೃಪೆ:,ವಿಕಿಪೀಡಿಯ

ಪದ್ಮ ಪ್ರಶಸ್ತಿ


2016ನೇ ಸಾಲಿನ 'ಪದ್ಮ ಪ್ರಶಸ್ತಿ' ಪಡೆದವರ ಪಟ್ಟಿ
💐💐💐💐💐💐💐💐💐

ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಶ್ರೀಶ್ರೀ ರವಿಶಂಕರ್ ಗುರೂಜಿ, ಅನುಪಮ್ ಖೇರ್ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸೇರಿದಂತೆ ಹಲವಾರು ಸಾಧಕರು ನವದೆಹಲಿಯಲ್ಲಿ ನಡೆದ ಪದ್ಮ ಪ್ರಶಸ್ತಿಸಮಾರಂಭದಲ್ಲಿ ಪಾಲ್ಗೊಂಡು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ನಾಡಿನ ಪ್ರತಿ‍ಷ್ಠಿತ ಪ್ರಶಸ್ತಿ ಪದ್ಮ ವಿಭೂಷಣಕ್ಕೆ 10, ಪದ್ಮ ಭೂಷಣಕ್ಕೆ 19 ಹಾಗೂ ಪದ್ಮಶ್ರೀ ಪ್ರಶಸ್ತಿಗೆ 83 ಮಂದಿ ಭಾಜನರಾಗಿದ್ದಾರೆ. ಇದರಲ್ಲಿ 19 ಜನ ಮಹಿಳಾ ಸಾಧಕಿಯರಿರುವುದು ಹೆಮ್ಮೆಯ ಸಂಗತಿಯಾಗಿದೆ.

ಪದ್ಮ ವಿಭೂಷಣ ಪ್ರಶಸ್ತಿಯನ್ನು ಯಾಮಿನಿ ಕೃಷ್ಣಮೂರ್ತಿ ನೃತ್ಯದಲ್ಲಿ, ನಟ ರಜನಿಕಾಂತ್ ಸಿನಿಮಾ ವಲಯದಲ್ಲಿ, ರಾಮೋಜಿ ರಾವ್ ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಪಡೆದಿದ್ದಾರೆ. ಪದ್ಮ ವಿಭೂಷಣಕ್ಕೆ ಒಟ್ಟು 10 ಮಂದಿ ಭಾಜನರಾಗಿದ್ದಾರೆ. ಅವಿನಾಶ್ ದೀಕ್ಷಿತ್ ಸಾಹಿತ್ಯ ಹಾಗೂ ಶಿಕ್ಷಣ-ಯುಎಸ್ಎ, ಧೀರೂಭಾಯಿ ಅಂಬಾನಿ ಮರಣೋತ್ತರ ಪ್ರಶಸ್ತಿ ಪಡೆದಿದ್ದಾರೆ.

ಪದ್ಮ ಭೂಷಣ ಪ್ರಶಸ್ತಿಯು ಅನುಪಮ್ ಖೇರ್, ಸಾನಿಯಾ ಮಿರ್ಜಾ, ವಿನೋದ್ ರಾಯ್, ಸೈನಾ ನೆಹ್ವಾಲ್ ಸೇರಿದಂತೆ ಒಟ್ಟು 19 ಮಂದಿಗೆ ಸಂದಿದೆ. ಪದ್ಮಶ್ರೀ ಪ್ರಶಸ್ತಿಯನ್ನು ಪ್ರಿಯಾಂಕಾ ಛೋಪ್ರಾ, ತುಳಸಿದಾಸ್ ಬೋರ್ಕರ್, ಭಿಕುದಾನ್ ಗಾಧ್ವಿ, ಅಜಯ್ ಪಾಲ್ ಸಿಂಗ್ ಬಂಗಾ ಹೀಗೆ ಒಟ್ಟು 83 ಮಂದಿ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು.

👁 ಜಿಕೆಮಣಿ ರೋಷನ್👁👁

ಮಾಹಿತಿ ಸಂಗ್ರಹ

1) ಯಾವ ದೇಶವು ಕಾಗದವನ್ನು ಸಂಶೋಧಿಸಿತು? 

ಉತ್ತರ:- ಚೀನಾ

2) ಕೋಶಕೇಂದ್ರದಲ್ಲಿ ಕಂಡುಬರುವ ಕನಗಳು ಯಾವವು?

ಉತ್ತರ:- ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳು

3) ಪ್ರಪಂಚದಲ್ಲಿಯೇ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?

ಉತ್ತರ:- ಬೈಕಲ್ ಸರೋವರ
 
4) ಯಾವ ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರಾಷ್ಟ್ರೀಕರಣಗೊಂಡಿತು?

ಉತ್ತರ:- 1949 ರಲ್ಲಿ

 
5)  ಸೆಶೆಲ್ಸ್ ದ್ವೀಪ ಕಂಡುಬರುವುದು ಎಲ್ಲಿ? 

ಉತ್ತರ:- ಮಾಹೆಯಲ್ಲಿ

6) ತಾಯ್ಲೆಂಡಿನ ಕರೆನ್ಸಿ ಯಾವುದು?  Thai Baht

ಉತ್ತರ:- ತಾಯ್ ಬಾಟ್ (Thai Baht)

 
7) ಸುಭಾಷ್ ಚಂದ್ರ ಬೋಸರ ತಂದೆಯ ಹೆಸರೇನು? What is father name of Subash Chandra bose?

ಉತ್ತರ:- ಜಾನಕಿನಾತ ಬೋಸ್

 

8) ಮೊಘಲರ ಕೊನೆಯ ಚಕ್ರವರ್ತಿ ಯಾರು?

ಉತ್ತರ:- ಔರಂಗಜೇಬ

 
9) ಯುನೆಸ್ಕೋದ ಪ್ರಧಾನ ಕಚೇರಿಯು ಎಲ್ಲಿ ಕಂಡುಬರುತ್ತದೆ? 

ಉತ್ತರ:- ಪ್ಯಾರಿಸ್ ನಲ್ಲಿ ಕಂಡುಬರುತ್ತದೆ

 

10) ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯಲಾಗುತ್ತದೆ? 

ಉತ್ತರ:- ಖಾನ್ ಅಬ್ದುಲ್ ಗಫರ್ ಖಾನ್

 

11) ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ್ರ ಯಾವುದು? 

ಉತ್ತರ:- ಸಿರೀಸ್ ಎಂಬ ನಕ್ಷತ್ರ

 
12) Aurum ಎಂಬ ಲ್ಯಾಟಿನ್ ಹೆಸರು ಸಂಬಂಧಿಸಿರುವುದು  _____.

ಉತ್ತರ:- ಬಂಗಾರ (Gold)

 
13) ಮಾರ್ಸ್ ಆರ್ಬಿಟರಿ ಮಿಷನ್ ಮಂಗಳಯಾನ ಉಡಾವಣೆ ಮಾಡಿದ್ದು? 

ಉತ್ತರ:- ಶ್ರೀಹರಿಕೋಟಾದಿಂದ

 

14) ಜಿಮ್ಮೀ ವೇಲ್ಸ್ ಅವರು ................ ವೆಬ್ ಸೈಟ್ ನ ಸಂಸ್ಥಾಪಕರಾಗಿದ್ದಾರೆ.

ಉತ್ತರ:- ವಿಕಿಪಿಡಿಯಾ

 
15) ಪ್ರತಿ ವರ್ಷ ಪರಿಸರ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ? 

ಉತ್ತರ:- ಜೂನ್ 5

 
16) ಹಿಮಪ್ರವಾಹದಲ್ಲಿರುವ ಆಳವಾದ ಬಿರುಕನ್ನು ಏನೆಂದು ವರ್ಣಿಸುವಿರಿ?  

ಉತ್ತರ:- ಕೊರಕಲು

 
17) ಗ್ರೆನೈಟ್ ಎನ್ನುವುದು ಯಾವ ಕಲ್ಲಿಗೆ ಉದಾಹರಣೆಯಾಗಿದೆ?

ಉತ್ತರ:- ಅಗ್ನಿಶಿಲೆ

 
18) ನಮ್ಮ ದೇಶದ ರಾಷ್ತ್ರೀಯ ಹಾಡು ವಂದೆ ಮಾತರಂ ನ್ನು ಬರೆದವರು? 

ಉತ್ತರ:- ಬಂಕಿಮ್ ಚಂದ್ರ ಚಟರ್ಜಿ

 
19) ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭವಾದದ್ದು .............. 

ಉತ್ತರ:- 8 ನೇ ಆಗಷ್ಟ್ 1942 ರಂದು 

20) ದೀನ್ ಇ ಇಲಾಹಿ ಮತದ ಸಂಸ್ಥಾಪಕರಾರು?

ಉತ್ತರ:- ರಾಜಾ ಅಕ್ಬರ್

21) ಮಾನವನ ದೇಹದಲ್ಲಿರುವ ಅತ್ಯಂತ ಚಿಕ್ಕ ಮೂಳೆ ಯಾವುದು? 

ಉತ್ತರ:- ಕಿವಿಯಲ್ಲಿ ಕಂಡುಬರುವ "ಸ್ಟೆಪ್ಪಿಸ್" ಎಂಬ ಮೂಳೆ

 

22) ಜಗತ್ತಿನ ಅತಿ ದೊಡ್ಡ ಮರುಭೂಮಿ ಯಾವುದು? 

ಉತ್ತರ:- ಸಹಾರ ಮರುಭೂಮಿ

 

23) ಮಾನವನ ದೇಹದಲ್ಲಿರುವ ಯಾವ ಅಂಗವು ಮತ್ತೆ ಪುನರ್ಜನ್ಮ ಪಡೆಯಬಹುದಾಗಿದೆ? 

ಉತ್ತರ:- ಲೀವರ್

 
24) ಕುಂಚಳ್ಳಿ ಜಲಪಾತವು ಎಲ್ಲಿ ಕಂಡುಬರುತ್ತದೆ? kunchilal water falls is situated in which state?

ಉತ್ತರ:- ಕರ್ನಾಟಕ

 

25) ಹಸಿರುಮನೆ ಪರಿಣಾಮಕ್ಕೆ ಕಾರಣವಾದ ಅನಿಲ ಯಾವುದು?

ಉತ್ತರ:- co2