Saturday 1 August 2015

ವಿಶ್ವ ಸ್ನೇಹಿತರ ದಿನ

🍂🍂🍂🍂🍂🍂🍂🍂
gkmani2u Roshan
🍂🍂🍂🍂🍂🍂🍂🍂

👬👬👬ವಿಶ್ವ ಸ್ನೇಹಿತರ ದಿನ: ಕುತೂಹಲ ಕೆರಳಿಸುವ ಇಂಟರೆಸ್ಟಿಂಗ್ ಕಹಾನಿ! 👬👬

👉 ನಿಷ್ಕಲ್ಮಷ ಸಂಬಂಧಕ್ಕೆ ಮತ್ತೊಂದು ಹೆಸರೇ ಸ್ನೇಹ. ಯಾವುದೇ ಸಂಬಂಧಗಳು ಮುರಿದು ಬಿದ್ದರೂ ಸ್ನೇಹ ಮಾತ್ರ ಕೊನೇ ತನಕ ಗಟ್ಟಿಯಾಗಿರುತ್ತದೆ. ಅದರ ಶಕ್ತಿಯೇ ಹಾಗೆ. ಸ್ನೇಹಿತರು ಯಾವುದೇ ಕಾರಣಗಳಿಂದ ದೂರಾದರೂ ಯಾವತ್ತಾದರೂ ಅವರ ಸ್ನೇಹ ಮತ್ತೆ ಒಂದಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹವು ಚಿರಾಯುವಾಗಿದೆ.
👉ಸ್ನೇಹಿತರ ಬಗ್ಗೆ ತಮಗಿರುವ ಕಾಳಜಿ ವ್ಯಕ್ತಪಡಿಸುವ ಸಲುವಾಗಿ ವಿಶ್ವದೆಲ್ಲೆಡೆಯಲ್ಲಿ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಸ್ನೇಹಿತರ ದಿನ, ಅದರ ಮೂಲ, ಅದು ಹೇಗೆ ಆರಂಭವಾಯಿತು, ವಿವಿಧ ದೇಶಗಳಲ್ಲಿ ಅದನ್ನು ಹೇಗೆ ಆಚರಿಸಲಾಗುತ್ತದೆ ಹಾಗೂ ಮತ್ತಿತರ ಕೌತುಕದ ವಿಷಯಗಳನ್ನು ಈ ಲೇಖನವು ನಿಮ್ಮ ಮುಂದಿಡಲಿದೆ.
👉ಸ್ನೇಹದ ಬಗ್ಗೆ ಸಾವಿರಾರು ವರ್ಷಗಳಿಂದ ಚರ್ಚೆ ನಡೆಸಲಾಗುತ್ತಿದೆ. ನಂಬಿಕೆ, ಪ್ರೋತ್ಸಾಹ, ಸಂವಹನ, ಪ್ರಾಮಾಣಿಕತೆ, ತಿಳುವಳಿಕೆ, ಕರುಣೆಯನ್ನು ಒಳಗೊಂಡಿರುವಂತಹ ಅತ್ಯಂತ ದೃಢ ಸಂಬಂಧವೇ ಸ್ನೇಹ.
👉ಸ್ನೇಹಿತರ ಬಗ್ಗೆ ಕಾಳಜಿ ಮತ್ತು ಪ್ರೀತಿ ವ್ಯಕ್ತಪಡಿಸಲು ಯಾವುದೇ ವಿಶೇಷ ದಿನ ಬೇಕೆಂದಿಲ್ಲ. ಆದರೆ ಸ್ನೇಹಿತರ ದಿನವು ನಿಮ್ಮ ಸ್ನೇಹಿತರ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಗೌರವ ತೋರಿಸುವಂತಹ ಒಂದು ಅವಕಾಶವನ್ನು ಒದಗಿಸುತ್ತದೆ.
👉ಈ ಜಗತ್ತಿನಲ್ಲಿ ಇನ್ನೂ ಗಟ್ಟಿಯಾಗಿ ಉಳಿದಿರುವ ಸಂಬಂಧವೆಂದರೆ ಅದು ಸ್ನೇಹ ಮಾತ್ರ. ಇದು ಅತ್ಯಂತ ವಿಶೇಷವಾಗಿರುಂತಹ ಆಕರ್ಷಣೆ ಮತ್ತು ನಂಬಿಕೆಯ ಸಂಬಂಧ. 👉ಸ್ನೇಹವೆಂದರೆ ನಮ್ಮ ಬಗ್ಗೆ ಕಾಳಜಿ ವಹಿಸುವ ಮತ್ತು ಕಷ್ಟದಲ್ಲಿ ಹೆಗಲು ಕೊಡುವಂತಹ ಒಂದು ಅಭೂತಪೂರ್ವ ಸಂಬಂಧ.
👉 ಸ್ನೇಹಿತರ ದಿನವನ್ನು ಮೊದಲು ಆರಂಭಿಸಿದವರು ಜಾಯ್ಸ್ ಹಾಲ್. 1919ರಲ್ಲಿ ಹಾಲ್ ಮಾರ್ಕ್ ಕಾರ್ಡ್ ಗಳನ್ನು ಸ್ಥಾಪಿಸಿದ ಈತ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಜನರು ಸ್ನೇಹಿತರ ದಿನವಾಗಿ ಆಚರಿಸಬೇಕೆಂದು ಬಯಸಿ ಇದನ್ನು ಆರಂಭಿಸಿದ.

👉1958ರ ಜುಲೈ 20ರಂದು ಡಾ. ಅರ್ಟೆಮಿಯೊ ಬ್ರಾಚೊ ಎಂಬವರು ವಿಶ್ವ ಮಟ್ಟದಲ್ಲಿ ಸ್ನೇಹಿತರ ದಿನವನ್ನು ಆಚರಿಸಬೇಕೆಂಬ ಪ್ರಸ್ತಾಪವನ್ನಿಟ್ಟರು. ಪರಾಗ್ವೆಯ ಅಸುನಸಿಯೊನ್ ನಿಂದ 200 ಕಿ.ಮೀ. ಉತ್ತರದಲ್ಲಿರುವ ಪರಾಗ್ವೆ ನದಿಯ ನಗರದವಾದ ಪುರ್ಟೊ ಪಿನಾಸ್ಕೋದಲ್ಲಿ ತನ್ನ ಸ್ನೇಹಿತರೊಂದಿಗೆ ರಾತ್ರಿಯೂಟವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಬ್ರಾಚೋ ಅವರು ಈ ಪ್ರಸ್ತಾವವನ್ನಿಟ್ಟಿದ್ದರು.

👉2011 ಎಪ್ರಿಲ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜುಲೈ 30ನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಅಚರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.
👉 ದಕ್ಷಿಣ ಅಮೆರಿಕಾದ ದಕ್ಷಿಣಭಾಗದ ಕೆಲವೊಂದು ರಾಷ್ಟ್ರಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಪರಾಗ್ವೆಯಲ್ಲಿ ಇದನ್ನು ಆಚರಿಸಲಾಗುತ್ತದೆ. 👉1958ರಲ್ಲಿ ಜುಲೈ 30ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಆಚರಿಸಲು ಪರಾಗ್ವೆ ಪ್ರಸ್ತಾವ ಮಾಡಿತ್ತು. ಸಾಂಪ್ರದಾಯಿಕವಾಗಿ ಆಗಸ್ಟ್‌ನ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಕೆಲವೊಂದು ರಾಷ್ಟ್ರಗಳಲ್ಲಿ ಸ್ನೇಹಿತರ ದಿನ ಆಚರಣೆಗೆ ಯಾವುದೇ ನಿಗದಿತ ದಿನವಿಲ್ಲ. ಗ್ರೀಟಿಂಗ್ ಕಾರ್ಡ್ ಕಂಪೆನಿಗಳಿಂದ ಆರಂಭವಾದಂತಹ ಈ ಆಚರಣೆಯು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಪಡೆದುಕೊಂಡು ರಜಾದಿನವನ್ನು ತುಂಬಾ ಆಸಕ್ತಿಯಿಂದ ಆಚರಿಸಲಾಗುತ್ತಿದೆ. ಅದರಲ್ಲೂ ಭಾರತ, ಬಾಂಗ್ಲಾದೇಶ ಮತ್ತು ಮಲೇಶಿಯಾದಲ್ಲಿ ಇದರ ಬಗ್ಗೆ ಆಸಕ್ತಿ ಬೆಳೆಯುತ್ತಿದೆ.

👉ಸ್ನೇಹಕ್ಕೇಕೆ ಶಾಸ್ತ್ರದ ಹಂಗು !! ದಕ್ಷಿಣ ಏಶ್ಯಾದಲ್ಲಿ ರಜಾದಿನವನ್ನು ಪ್ರಚುರ ಮಾಡುವವರು 1935ರಲ್ಲಿ ಅಮೆರಿಕಾದಲ್ಲಿ ನೆಲೆಸಿರುವಂತಹ ತಮ್ಮ ಸ್ನೇಹಿತರಿಗಾಗಿ ಈ ದಿನವನ್ನು ಅರ್ಪಿಸುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ. ಆದರೆ ಇದರ ನಿಜವಾದ ವರ್ಷ 1919.
👉ಸ್ನೇಹಿತರ ದಿನದಂದು ಉಡುಗೊರೆ, ಕಾರ್ಡ್ ಮತ್ತು ಕೈಗೆ ರಿಬ್ಬನ್‌ನಂತಹ ಪಟ್ಟಿಗಳನ್ನು ಧರಿಸುವುದು ಸಾಮಾನ್ಯವಾಗಿ ಆಚರಿಸಿಕೊಂಡಿರುವಂತಹ ಸಂಪ್ರದಾಯ.
👉 1935ರಲ್ಲಿ ಅಮೆರಿಕಾದ ಕಾಂಗ್ರೆಸ್ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಘೋಷಿಸಿತು. ಸ್ನೇಹಿತರಿಗೆ ಗೌರವ ಸೂಚಿಸುವ ಸಲುವಾಗಿ ರಾಷ್ಟ್ರೀಯ ರಜೆಯನ್ನು ಘೋಷಿಸಿದೆ. ಮಹಿಳೆಯರ ಸ್ನೇಹಿತರ ದಿನವನ್ನು ಸಪ್ಟೆಂಬರ್ ತಿಂಗಳ ಮೂರನೇ ಭಾನುವಾರದಂದು ಆಚರಿಸಲಾಗುತ್ತದೆ. ಪ್ರತಿಯೊಬ್ಬರು ಸ್ನೇಹಿತರ ದಿನವನ್ನು ಆಚರಿಸಿದರೆ ಬೆಸ್ಟ್ ಫ್ರೆಂಡ್ಸ್ ಅನಿಮಲ್ ಸೊಸೈಟಿಯು ಉತ್ತಮ ಸ್ನೇಹಿತರ ವಾರವನ್ನು ಆಚರಿಸುತ್ತಾ ಬಂದಿದೆ. ಅದು ಪ್ರತೀ ವರ್ಷ ಜೂನ್ 23ರಿಂದ 25ರ ತನಕ. ಇದನ್ನು ಪ್ರಾಣಿಗಳ ರಕ್ಷಣೆ ಮತ್ತು ಹಕ್ಕಿಗಾಗಿ ಆಚರಿಸುತ್ತಾ ಇದೆ. ಈ ವಾರದ ಮೊದಲ ದಿನವನ್ನು ಉತ್ತಮ ಗೆಳೆಯನ ದಿನವೆಂದು ಕರೆಯಲಾಗುತ್ತದೆ.
🍂🍂🍂🍂🍂🍂🍂🍂
🌹WISH U HAPPY
FREINDSHIP DAY🌹
🍂🍂🍂🍂🍂🍂🍂🍂
FM:ರೋಷನ್ ಜಗಳೂರು

Tuesday 7 July 2015

ಪ್ರಚಲಿತ

🌎gkmani2u group:🌎
ಇವತ್ತಿನ ದಿನದ ಆಯ್ದ ಕೆಲವೊಂದು ಪ್ರಚಲಿತ ಘಟನೆಗಳ ಮಾಹಿತಿ ನಿಮಗಾಗಿ.

(ರೋಷನ್ ಜಗಳೂರು gkmani2u)

*ಬ್ರಿಕ್ಸ್‌ನ 7ನೇ ಸಮಾವೇಶ ರಷ್ಯಾದ ಉಫದಲ್ಲಿ ಜುಲೈ 8, 9ರ‍ಂದು ನಡೆಯುತ್ತಿದೆ

*15 ಜುಲೈ 2014ರಂದು ರಚಿಸಲ್ಪಟ್ಟ ಬ್ರಿಕ್ಸ್ ಬ್ಯಾಂಕ್‌ನ ಅಧಿಕೃತ ಹೆಸರು
"ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ (ಎನ್ ಡಿ ಬಿ)
ಇದರ ಕೇಂದ್ರ ಕಚೇರಿ
🏠 ಚೀನಾದ ಶಾಂಘೈನಲ್ಲಿದೆ.

ಕರ್ನಾಟಕ ಮೂಲದ
👳ಕೆ ವಿ ಕಾಮತ್ ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ

🇮🇳BRICS ರಾಷ್ಟ್ರಗಳು:

🍂ಬ್ರೆಜಿಲ್ (ಅಧ್ಯಕ್ಷ ಡಿಲ್ಮಾ ರೂಸೆಫ್)
🍂 ರಷ್ಯಾ (ವ್ಲಾಡಿಮರ್‍ ಪುಟಿನ್)
🍂ಭಾರತ (ಮೋದಿ)
🍂ಚೀನಾ (ಕ್ಸಿ ಜಿನ್ ಪಿಂಗ್)
🍂ದಕ್ಷಿಣಾ ಆಪ್ರಿಕಾ (ಜೇಕಬ್ ಝುಮಾ)

👀ಮೊದಲ ಬ್ರಿಕ್ಸ್ ಸಮಾವೇಶ ನಡೆದದ್ದು ಯೆಕಟೆರಿನ್ ಬರ್ಗ್ (ರಷ್ಯಾ ಜೂ16 2009)

👀ಬ್ರಿಕ್ಸ್ ನ 6ನೇ ಸಮಾವೇಶ ನಡೆದದ್ದು ಬ್ರೆಜಿಲ್‌ನ ಪೋರ್ಟಾಲೆಜದಲ್ಲಿ (2014ರ ಜು 15,17)

🔮ಯೋಗಸೆಂಟರ್‍ ಹಾಗೂ
ಬಿಶ್ ಕೆಕ್ ನ ಆಸ್ಪತ್ರೆ ಹಾಗೂ ಭಾರತದ ಆಸ್ಪತ್ರೆಗಳ ಜತೆಗಿನ ವರ್ಚುವಲ್ ಲಿಂಕ್￿ಅನ್ನು ಕಿರ್ಗಿಸ್ತಾನದಲ್ಲಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

🍂🍂gkmani2u🍂🍂
👥ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಸ್ವಚ್ಚ ಭಾರತ ಅಭಿಯಾನದಡಿ ಅತಿ ಹೆಚ್ಚು ಸಮುದಾಯಿಕ ಹಾಗೂ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸುವ ರಾಜ್ಯಗಳ ಪೈಕಿ ಕರ್ನಾಟಕ 5ನೇ ಸ್ಥಾನದಲ್ಲಿದೆ.
(ಈ ಯೋಜನೆಯಡಿ 1680 ಶೌಚಗೃಹ ನಿರ್ಮಿಸಿದೆ)

🌇ವಿಶ್ವದಲ್ಲಿ ಅತಿ ಹೆಚ್ಚು ಪ್ರಮಾಣದ ಕಾರ್ಬನ್ ಹೊರ ಸೂಸುವ ದೇಶ: ಚೀನಾ

😹ಹಾಲಿವುಡ್ ನ "ಓಷನ್ಸ್" "ಕರಾಟೆ ಕಿಡ್ "ಚಿತ್ರಗಳ ನಿರ್ಮಾಪಕ ಜೆರ‍್ರಿ ವೇನ್‌ಂತ್ರಾಬ್ ನಿಧನ

🎓ಚೈಲ್ಡ್ ರೈಟ್ಸ್ ಅಂಡ್ ಯು (ಸಿ ಆರ್‍ ಐ) ಸಂಸ್ಥೇ ಕರ್ನಾಟಕದಲ್ಲಿ ಇತ್ತೀಚೆಗೆ ನಡೆಸಿರುವ ಸಮೀಕ್ಷೆ ಪ್ರಕಾರ ಯಾವ ಜಿಲ್ಲೆ ಬಾಲ ಕಾರ್ಮಿಕರಿಂದ ಮುಕ್ತವಾಗಿದೆ ಎಂದು ವರದಿ ಹೇಳಿದೆ?
ಉತ್ತರ: ದಕ್ಷಿಣ ಕನ್ನಡ
(ಅತಿ ಹೆಚ್ಚು ಬಾಲ ಕಾರ್ಮಿಕರಿರುವ ಜಿಲ್ಲೆ ಬೆಂಗಳೂರು)

😰ಇತ್ತೀಚೆಗೆ ನಿಧನರಾದ ಉರ್ದು ಕಾದಂಬರಿಕಾರ ಅಬ್ದುಲ್ ಹುಸೇನ್.ಯಾವ ದೇಶದವರು?
    ಪಾಕಿಸ್ತಾನ

www.gkmani2u.blogspot.com

Tuesday 30 June 2015

ಶಾಂತಿ ಸೂಚ್ಯಕದಲ್ಲಿ ಭಾರತ 143ನೇ ಸ್ಥಾನದಲ್ಲಿದೆ

gkmani2u ROSHAN

ಭಾರತಕ್ಕೆ 143ನೇ ಸ್ಥಾನ
🌗🌗PRAJAVANI🌗🌗

* ಜಾಗತಿಕ ಶಾಂತಿ ಸೂಚ್ಯಂಕ
ಪಟ್ಟಿಯಲ್ಲಿ ಭಾರತಕ್ಕೆ 143ನೇ ಸ್ಥಾನ ದೊರೆತಿದೆ.

* ಅಗ್ರಸ್ಥಾನ ಪಡೆದಿರುವ ಐಸ್‌ಲೆಂಡ್‌ ‘ಜಗತ್ತಿನ ಶಾಂತಿಯುತ ರಾಷ್ಟ್ರ’
ಎಂಬ ಗೌರವ ತನ್ನದಾಗಿಸಿಕೊಂಡಿದೆ.

*ಆರ್ಥಿಕತೆ ಮತ್ತು ಶಾಂತಿಗೆ ಸಂಬಂಧಿಸಿದ ಸಂಸ್ಥೆಯೊಂದು ತನ್ನ 2015ರ ಸಾಲಿನ ಶಾಂತಿ ಸೂಚ್ಯಂಕವನ್ನು ಪ್ರಕಟಿಸಿದೆ.

*ಪಟ್ಟಿಯಲ್ಲಿ ಒಟ್ಟು 162 ರಾಷ್ಟ್ರಗಳಿಗೆ ವಿವಿಧ ಕ್ರಮಾಂಕಗಳನ್ನು ನೀಡಿದೆ.

*ಒಂದು ದೇಶದಲ್ಲಿ ಅಪರಾಧ ಪ್ರಕರಣ, ಹಿಂಸೆ, ಸಂಘರ್ಷ ಮತ್ತು ಸೈನಿಕ ಕಾರ್ಯಾಚರಣೆ ಎಷ್ಟರಮಟ್ಟಿಗೆ ನಡೆಯುತ್ತದೆ ಎಂಬುದನ್ನು ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.

*ಉತ್ತರ ಅಟ್ಲಾಂಟಿಕ್‌ ಸಾಗರದಲ್ಲಿರುವ ಪುಟ್ಟ ರಾಷ್ಟ್ರ ಐಸ್‌ಲೆಂಡ್‌ನಲ್ಲಿ ಹೋದ ಒಂದು ವರ್ಷದ ಅವಧಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹಿಂಸಾಕೃತ್ಯ ನಡೆದಿದೆ. ಆದ್ದರಿಂದ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ.

*ಭಾರತವು ಭೂತಾನ್‌, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಿಗಿಂತ  ಕೆಳಗಿನ ಸ್ಥಾನದಲ್ಲಿದೆ.

*‘ಆಂತರಿಕ ಸಂಘರ್ಷದಿಂದಾಗಿ ಹಲವರು ಬಲಿಯಾಗಿದ್ದಾರೆ. ನಕ್ಸಲರ ಸಮಸ್ಯೆ ಕೂಡಾ ಇದೆ. ಇದರಿಂದ ಭಾರತ ಕೆಳಗಿನ ಸ್ಥಾನದಲ್ಲಿ ಕಾಣಿಸಿಕೊಂಡಿದೆ’ ಎಂದು ಸಂಸ್ಥೆಯ ವರದಿ ತಿಳಿಸಿದೆ.

*ಪಟ್ಟಿಯಲ್ಲಿ ಅಗ್ರ ಹತ್ತರಲ್ಲಿ ಯೂರೋಪ್‌ನ 6 ರಾಷ್ಟ್ರಗಳು ಸ್ಥಾನ ಪಡೆದಿವೆ.

*ಡೆನ್ಮಾರ್ಕ್‌ ಮತ್ತು ಆಸ್ಟ್ರಿಯಾ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ.

*‘ಯೂರೋಪ್‌ ಖಂಡ ವಿಶ್ವದ ಅತ್ಯಂತ ಶಾಂತಿಯುತ ವಲಯ ಎಂಬ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ’ ಎಂದು ವರದಿ ಹೇಳಿದೆ.

*ಪಾಕಿಸ್ತಾನಕ್ಕೆ 154ನೇ ಸ್ಥಾನ ದೊರೆತಿದೆ. 
ಭೂತಾನ್‌ (18), ನೇಪಾಳ (62), ಬಾಂಗ್ಲಾದೇಶ (84) ಮತ್ತು ಶ್ರೀಲಂಕಾ (114) ದೇಶಗಳು ಭಾರತಕ್ಕಿಂತ ಮುಂದಿವೆ.

*ಅಮೆರಿಕಕ್ಕೆ 94ನೇ ಕ್ರಮಾಂಕ ನೀಡಲಾಗಿದೆ.

* ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ದೇಶ ಅಫ್ಘಾನಿಸ್ತಾನ (160).
ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ದಾಳಿಯಿಂದ ನಲುಗಿರುವ ಸಿರಿಯಾ, ಇರಾಕ್‌ ಕೊನೆಯ ಸ್ಥಾನಗಳಲ್ಲಿವೆ.

ಜುಲೈ 01:: ರಾಷ್ಟ್ರೀಯ ವೈದ್ಯರ ದಿನಾಚರಣೆ

ಇಂದು ಜುಲೈ 1:
ರಾಷ್ಟ್ರೀಯ ವೈದ್ಯರ ದಿನ

(ಬಿಧಾನ್ ಚಂದ್ರರಾಯ್ ಅವರ ಹುಟ್ಟಿನ ದಿನವಾದ ಜುಲೈ 1ರಂದು ರಾ‍ಷ್ಟ್ರೀಯ ವೈದ್ಯರ ದಿನ ಆ‍ಚರಿಸಲಾಗುತ್ತಿದೆ.. ಬಿದಾನ್ ಚಂದ್ರರಾಯ್ ಅವರ ಒಂದಿಷ್ಟು ಮಾಹಿತಿ ಇಲ್ಲಿದೆ)

(ರೋಷನ್ ಜಗಳೂರು)
🌗🌗ಜಿಕೆಮಣಿ2ಯು🌗🌗

ಭಾರತ ರತ್ನ  ಪುರಸ್ಕೃತ 
ಬಿಧಾನ್‌ ಚಂದ್ರ ರಾಯ್‌
(೧ ಜುಲೈ ೧೮೮೨- ೧ ಜುಲೈ ೧೯೬೨) 

*ಇವರು ಭಾರತದಲ್ಲಿನಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ.
ಇವರು ಈ ಹುದ್ದೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರತಿನಿಧಿಯಾಗಿ ಹದಿನಾಲ್ಕು ವರ್ಷಗಳ ಕಾಲ
೧೯೪೮ ರಿಂದ ೧೯೬೨ರಲ್ಲಿನ ಮರಣದವರೆಗೂ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಅತ್ಯಂತ ಗೌರವಾನ್ವಿತ ವೈದ್ಯರಾಗಿದ್ದರು ಮತ್ತು ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

*ಇವರನ್ನು ಪಶ್ಚಿಮ ಬಂಗಾಳದ ಶ್ರೇಷ್ಟ ಶಿಲ್ಪಿಯೆಂದು ಕರೆಯಲಾಗಿದ್ದು

*ಇವರು ಕಲ್ಯಾಣಿ ಮತ್ತು ಬಿಧಾನ್‌ ನಗರ ಎಂಬ ಎರಡು ದೊಡ್ಡ ನಗರಗಳ ಹುಟ್ಟಿಗೆ ಕಾರಣರಾಗಿದ್ದಾರೆ. ಇವರು ಕಲ್ಕತ್ತಾ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಹಳೆಯ ವಿಧ್ಯಾರ್ಥಿಯಾಗಿದ್ದಾರೆ.

* F.R.C.S. ಮತ್ತು M.R.C.P ಯನ್ನು ಜೊತೆಜೊತೆಯಾಗಿ ಎರಡು ವರ್ಷ ಮೂರು ತಿಂಗಳಲ್ಲಿ ಪೂರೈಸಿದ ಭಾರತದಲ್ಲಿನ ಅತೀ ವಿರಳ ಜನರಲ್ಲಿ ಇವರೂ ಒಬ್ಬರಾಗಿದ್ದಾರೆ.

* ಇವರ ಹುಟ್ಟಿದ (ಮತ್ತು ಮರಣಿಸಿದ) ದಿನವಾದ ಜುಲೈ ೧ನ್ನು ಪ್ರತೀ ವರ್ಷ "ರಾಷ್ಟ್ರೀಯ ವೈದ್ಯರ ದಿನ" ವೆಂದು ಆಚರಿಸಲಾಗುತ್ತದೆ.

*ಡಾ.ಬಿಧಾನ್‌ ಚಂದ್ರ ರಾಯ್‌ ಅವರು ಪಾಟ್ನಾದಲ್ಲಿರುವ ತಮ್ಮ ಆಸ್ತಿಯನ್ನು ಆಧಾರಿಸಿ ಒಂದು ಸಂಸ್ಥೆಯನ್ನು(trust) ತಮ್ಮ ಸಾಮಾಜಿಕ ಕೆಲಸಕಾರ್ಯಗಳಿಗಾಗಿ ನಿರ್ಮಿಸಿದ್ದಾರೆ ಈ ಸಂಸ್ಥೆಗೆ ಶ್ರೇಷ್ಠ ರಾಜನೀತಿಜ್ಞರಾದ ಗಂಗಾ ಶರಮ್‌ ಸಿಂಗ್‌(ಸಿನ್ಹಾ) ಅವರನ್ನು ನೇಮಿಸಿದ್ದಾರೆ.

*ಇವರು ಭಾರತದ ಅತ್ಯಂತ ಶ್ರೇಷ್ಠ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ೪ ಫೇಬ್ರುವರಿ ೧೯೬೧ರಲ್ಲಿ ಪಡೆದರು.

*ಅವರು ಬ್ರಮ್ಹೋ ಸಮಾಜದ ಓರ್ವ ಸದಸ್ಯರೂ ಆಗಿದ್ದಾರೆ.
*******gkmani2u*****

🌗ಬಾಲ್ಯಜೀವನ🌗

*ಬಿಧಾನ್‌ ಚಂದ್ರರಾಯ್‌ ಅವರು ಜುಲೈ ೧, ೧೮೮೨ರಂದು
ಬಿಹಾರದ ಪಾಟ್ನಾದಲ್ಲಿನ ಬಿ.ಎಮ್‌.ದಾಸ್‌ ರಸ್ತೆ, ಬಂಕಿಪುರದಲ್ಲಿ ಜನಿಸಿದರು.

*ಅವರ ತಂದೆಯವರಾದ ಪ್ರಕಾಶಚಂದ್ರ ಅವರು ಓರ್ವ ಸುಂಕಾಧಿಕಾರಿಯಾಗಿದ್ದರು.
* ಇವರು ಇವರ ತಂದೆಯವರ ಐದು ಮಕ್ಕಳಲ್ಲಿ ಕಿರಿಯವರಾಗಿದ್ದು, ತನ್ನ ಪಾಲಕರ ಸರಳತೆ, ಶಿಸ್ತು ಮತ್ತು ಕಾರುಣ್ಯತೆಯಿಂದ ಪ್ರಭಾವಿತರಾಗಿದ್ದರು. ಇವರ ಪಾಲಕರು ಇವರಲ್ಲಿ ತನ್ನ ಸಂಬಂಧಿಕರಲ್ಲಿ ಮಾತ್ರ ಕರುಣೆ ಮತ್ತು ವಾತ್ಸಲ್ಯವನ್ನು ಹೊಂದದೇ ಎಲ್ಲ ಜನರಲ್ಲೂ ದಯಾಪರನಾಗಿರುವ ಬುದ್ದಿ ಮೂಡುವಂತೆ ಪ್ರೆರೇಪಣೆ ನೀಡಿದರು. ಇವರು ತಮ್ಮ ಹದಿನಾಲ್ಕನೇ ವರ್ಷದಲ್ಲಿರುವಾಗ ಅವರ ತಾಯಿಯವರನ್ನು ಕಳೆದುಕೊಂಡರು. ಇವರ ತಂದೆಯವರು ಅವರ ಐದು ಮಕ್ಕಳಿಗೆ ತಾಯಿಯಾಗಿ, ತಂದೆಯಾಗಿ ಕರ್ತವ್ಯ ನಿರ್ವಹಿಸಿದರು. ಅವರು ಯಾರಿಗೂ ಕೆಲಸ ಮಾಡುವಂತೆ ಒತ್ತಾಯಿಸಲಿಲ್ಲ ಆದರೆ ಗುರಿಯನ್ನು ಸಾಧಿಸಲು ದಾರಿಯನ್ನು ಮಾತ್ರ ತೋರಿಸಿಕೊಟ್ಟರು. ಎಲ್ಲ ಐದು ಮಕ್ಕಳೂ ತಮ್ಮ ತಮ್ಮ ಮನೆಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಾಗಿತ್ತು. ಅವು ಬಿಧಾನ್‌ ಅವರ ಕಾಲೇಜು ದಿನಗಳಲ್ಲಿ ಅವರಿಗೆ ತುಂಬ ಸಹಾಯಕವಾದ ಅಂಶಗಳಾದವು.

*ಬಿಧಾನ್‌ ಅವರು ತಮ್ಮ I.A.ಯನ್ನು ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮತ್ತು ಬಿ.ಎ ಪದವಿಯನ್ನು ಪಾಟ್ನಾ ಕಾಲೇಜಿನಲ್ಲಿ ಗಣಿತದಲ್ಲಿ ಅಗ್ರಗಣ್ಯರಾಗಿ ಪುರೈಸಿದರು. ನಂತರ ಪ್ರವೇಶಕ್ಕಾಗಿ ಬೆಂಗಾಲ್‌ ಇಂಜಿನಿಯರಿಂಗ್‌ ಕಾಲೇಜ್‌ ಮತ್ತು ಕಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಅರ್ಜಿ ಸಲ್ಲಿಸಿದರು. ಎರಡೂ ಕಡೆಯಲ್ಲಿಯೂ ಅವಕಾಶಗಳು ದೊರೆಯಾಗಿಯೂ ಅವರು ವೈದ್ಯಕೀಯ ಕಾಲೇಜಿಗೆ ಹೋಗುವ ಆಯ್ಕೆಯನ್ನೇ ಆಯ್ಕೆ ಮಾಡಿಕೊಂಡರು.

* ಬಿಧಾನ್‌ ಅವರು ೧೯೦೧ ಜೂನ್‌ರಲ್ಲಿ ಕಲ್ಕತ್ತಾಗೆ ಆಗಮಿಸಿದರು. ಅವರು ಅಲ್ಲಿ ಬರೆದ "Whatever thy hands findeth to do, do it with thy might." ಎಂಬ ವಾಕ್ಯದಿಂದ ತುಂಬ ಪ್ರಭಾವಿತರಾದರು. ಮತ್ತು ಈ ವಾಕ್ಯವು ಅವರ ಜೀವನದ ಪಥದ ಪರಿವರ್ತನೆಗೆ ಮತ್ತು ಜಿವನದುದ್ದಕ್ಕೂ ಅವರು ನಡೆದ ದಾರಿಗೆ ಕಾರಣವಾದ ಮುಖ್ಯ ಅಂಶವಾಯಿತು.

*ಬಿಧಾನ್‌ ಅವರ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವಾಗಿನ ಜೀವನವು ಅತ್ಯಂತ ಪರಿಶ್ರಮದಯಕವಾಗಿತ್ತು. ಮೊದಲ ವರ್ಷದಲ್ಲಿಯೇ ತಂದೆಯವರು ಉಪ ಜಿಲ್ಲಾಧಿಕಾರಿಯಾಗಿ ನಿವೃತ್ತಿಯನ್ನು ಪಡೆದರು. ಆದ್ದರಿಂದ ಅವರು ಬಿಧಾನ್‌ ಅವರಿಗೆ ಬಹಳ ದಿನಗಳ ಕಾಲ ಹಣವನ್ನು ಕಳುಹಿಸಿಕೊಡಲು ಅಶಕ್ತರಾದರು. ಬಿಧಾನ್‌ ಅವರು ಸ್ಕಾಲರ್‌ಶಿಫ್‌ಗಳನ್ನು ಪಡೆಯುತ್ತಿದ್ದರು ಮತ್ತು ತಮ್ಮ ಖರ್ಚುವೆಚ್ಚಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸುತ್ತಿದ್ದರು. ತಮ್ಮ ಪುಸ್ತಕಳನ್ನು ಸಹ ಖರೀದಿಸದೇ ಗ್ರಂಥಾಲಯಗಳಿಂದ ಪಡೆಯುವುದು ಮತ್ತು ಕಲಿಸುತ್ತಿರುವಾಗ ಬರೆದುಕೊಳ್ಳುವುದರ ಮೂಲಕ ಉಳಿಸುತ್ತಿದ್ದರು.

*ಬಿಧಾನ್‌ ಅವರು ಕಾಲೇಜಿನಲ್ಲಿರುವಾಗಲೇ ಬಂಗಾಳವಿಭಜನೆಯನ್ನು ಘೋಷಿಸಲಾಯಿತು. ಬಂಗಾಳ ವಿಭಜನೆಯ ವಿರುದ್ಧ ರಾಷ್ಟ್ರೀಯ ನಾಯಕರಾದ ಲಾಲಾ ಲಜಪತ್‌ರಾಯ್‌, ಅರವಿಂದ ಘೋಷ್‌, ತಿಲಕ ಮತ್ತು ಬಿಪಿನ್‌ ಚಂದ್ರಪಾಲ್‌ ಇವರ ಮುಂದಾಳತ್ವದಲ್ಲಿ ಹೋರಾಟಗಳು ಪ್ರಾರಂಭವಾದವು. ಬಿಧಾನ್‌ ಅವರು ಪೂರ್ಣ ಪ್ರಮಾಣದಲ್ಲಿ ಈ ಚಳುವಳಿಯಲ್ಲಿ ಪಾಲ್ಗೊಳ್ಳಲು ಮನಸ್ಸು ಮಾಡಿದರೂ ತಮ್ಮ ಆವೇಶವನ್ನು ಹಿಡಿತದಲ್ಲಿಟ್ಟುಕೊಂಡು ತಾನು ಕಲಿತು ತನ್ನ ಉದ್ಯೋಗದ ಮೂಲಕ ತನ್ನ ದೇಶವನ್ನು ಇನ್ನು ಹೆಚ್ಚು ಒಳ್ಳೆಯ ರೀತಿಯಲ್ಲಿ ಸೇವೆ ಮಾಡುವ ಮನಸ್ಸು ಮಾಡಿ ತಮ್ಮ ಅಭ್ಯಾಸದಲ್ಲಿ ಮನಸ್ಸನ್ನು ಕೆಂದ್ರೀಕರಿಸಿದರು.
** **** **** *** **
ವೃತ್ತಿಜೀವನ::

*ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಕೂಡಲೇ, ಬಿ.ಸಿ. ರಾಯ್‌ ಅವರು ಪ್ರಾಂತೀಯ ಆರೋಗ್ಯ ಸೇವಾ ಕೇಂದ್ರವನ್ನು ಸೇರಿಕೊಂಡರು.
ಇವರು ಅಲ್ಲಿ ಪರಿಶ್ರಮದಿಂದ ಮತ್ತು ಅಗಾಧವಾಗಿ ಕೆಲಸಮಾಡಿದರು. ಇವರು ಅಲ್ಲಿ ಔಷಧಗಳನ್ನು ಶಿಫಾರಸು ಮಾಡುವುದನ್ನು ಕಲಿತರು ಕೆಲವು ವೇಳೆ ದಾದಿಯರಂತೆ ಅವಶ್ಯಕತೆ ಇದ್ದಾಗ ಸೇವೆ ಸಲ್ಲಿಸಲು ಹೋಗುತ್ತಿದ್ದರು. ಅವರು ತಮ್ಮ ಬಿಡುವಿನ ವೇಳೆಯಲ್ಲಿ ತಾವು ಸ್ವತಂತ್ರವಾಗಿ ಸೇವೆ ಸಲ್ಲಿಸುತ್ತಿದ್ದರು.ಮತ್ತು ಇದಕ್ಕೆ ಪ್ರತಿಯಾಗಿ ರೂ.೨ ಮಾತ್ರ ಚಿಕಿತ್ಸಾ ಶುಲ್ಕವೆಂದು ತೆಗೆದುಕೊಳ್ಳುತ್ತಿದ್ದರು.

*ಬಿಧಾನ್‌ ಅವರು ಕೇವಲ ರೂ.೧,೨೦೦ನ್ನು ಮಾತ್ರ ತೆಗೆದುಕೊಂಡು ಫೇಬ್ರುವರಿ ೧೯೦೯ರಲ್ಲಿ ಸೆಂಟ್‌ ಬಾರ್ಥೊಲೊಮೆವ್ಸ್‌ ಆಸ್ಪತ್ರೆಗೆ ಮುಂದಿನ ಶಿಕ್ಷಣಕ್ಕಾಗಿ ತನ್ನ ಹೆಸರನ್ನು ನೊಂದಾಯಿಸಲು ತೆರಳಿದರು. ಅಲ್ಲಿನ ಮುಖ್ಯಸ್ಥರು ಏಷ್ಯಾದಿಂದ ಅವರನ್ನು ವಿಧ್ಯಾರ್ಥಿಯಾಗಿ ಆಯ್ಕೆ ಮಾಡುವ ನಿರ್ಧಾರನ್ನು ಕೈಬಿಡುವ ಮೂಲಕ ಬಿಧಾನ್‌ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ಡಾ.ರಾಯ್‌ ಅವರು ಧೃತಿಗೆಡಲಿಲ್ಲ. ಅವರು ಮೇಲಿಂದ ಮೇಲೆ ಮೂವತ್ತು ಬಾರಿ ಅರ್ಜಿಯನ್ನು ಸಲ್ಲಿಸಿದ ನಂತರ ಮುಖ್ಯಾಧಿಕಾರಿಗೆ ಬಿಧಾನ್‌ ಅವರನ್ನು ಕಾಲೇಜಿಗೆ ವಿಧ್ಯಾರ್ಥಿಯಾಗಿ ತೆಗೆದುಕೊಳ್ಳಲೇ ಬೇಕಾಯಿತು. ಕೇವಲ ಎರಡು ವರ್ಷ ಮೂರು ತಿಂಗಳ ಅವಧಿಯಲ್ಲಿ M.R.C.P. ಮತ್ತು F.R.C.S. ನ್ನು ಪೂರೈಸಿ ಇಂಗ್ಲೆಂಡ್‌ನಿಂದ ೧೯೧೧ರಲ್ಲಿ ಸ್ವದೇಶಕ್ಕೆ ವಾಪಸಾದರು. ಸ್ವದೇಶಕ್ಕೆ ವಾಪಸಾದ ನಂತರ ಕಲ್ಕತ್ತಾ ಮೆಡಿಕಲ್‌ ಕಾಲೇಜಿನಲ್ಲಿ ಮತ್ತು ಕ್ಯಾಂಪ್‌ಬೆಲ್‌ ಮೆಡಿಕಲ್‌ ಸ್ಕೂಲ್‌ ಮತ್ತು ನಂತರ ಕಾರ್ಮಿಕಲ್‌ ಮೆಡಿಕಲ್‌ ಕಾಲೇಜಿನಲ್ಲಿ ಕಲಿಸುವ ವೃತ್ತಿಯನ್ನು ಪ್ರಾರಂಭಿಸಿದರು.

*ಡಾ.ರಾಯ್‌ ಸ್ವರಾಜ್ಯ ಕಲ್ಪನೆಯು ಸಾಕಾರವಾಗಲು ಪ್ರಜೆಗಳಲ್ಲಿ ಮಾನಸಿಕವಾದ ಮತ್ತು ದೈಹಿಕ ದೃಢತೆಯನ್ನು ತುಂಬುವುದುದರ ವಿನಹ ಸಾಧ್ಯವಾಗುವುದಿಲ್ಲ ಎಂದು ನಂಬಿದ್ದರು. ಅವರು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಈ ನಿಟ್ಟಿನಲ್ಲಿ ತಮ್ಮ ಕೊಡುಗೆಯನ್ನು ನೀಡಿದರು. ಅವರು ಈ ನಿಟ್ಟಿನಲ್ಲಿ ಜಾದವಪುರ ಟಿ.ಬಿ ಆಸ್ಪತ್ರೆ, ಚಿತ್ತರಂಜನ್‌ ಸೇವಾ ಸದನ್‌, ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು. ಕಮಲಾ ನೆಹರು ಆಸ್ಪತ್ರೆ, ವಿಕ್ಟೊರಿಯಾ ಸಂಸ್ಥೆ, ಮತ್ತು ಚಿತ್ತರಂಜನ್‌ ಕ್ಯಾನ್ಸರ್‌ ಆಸ್ಪತ್ರೆಗಳನ್ನು ಕಟ್ಟಿಸಿದರು.

* ಚಿತ್ತರಂಜನ್‌ ಸೇವಾ ಸದನ್‌ ಇದು ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ೧೯೨೬ರಲ್ಲಿ ಪ್ರಾರಂಭವಾಯಿತು. ಹೆಂಗಸರು ಮೊದಮೊದಲು ಆಸ್ಪತ್ರೆಗೆ ಬರಲು ಹಿಂಜರಿಯುತ್ತಿದ್ದರು. ಆದರೆ ಡಾ. ರಾಯ್‌ ಮತ್ತು ಅವರ ತಂಡದವರಿಗೆ ಧನ್ಯವಾದಗಳನ್ನು ಅರ್ಪಿಸಬೇಕು ಏಕೆಂದರೆ ಅವರ ಪ್ರಯತ್ನದಿಂದ ಎಲ್ಲ ವರ್ಗಗಳ ಮತ್ತು ಜನಾಂಗದ ಮಹಿಳೆಯರು ಆಸ್ಟತ್ರೆಗೆ ಬರತೊಡಗಿದರು. ಅವರು ಮಹಿಳೆಯರಿಗಾಗಿ ನರ್ಸಿಂಗ್‌ ಮತ್ತು ಸಾಮಾಜಿಕ ಸೇವೆಗಳಿಗಾಗಿನ ಕೇಂದ್ರವನ್ನು ಸ್ಥಾಪಿಸಿದರು.

*೧೯೪೨ರಲ್ಲಿ ರಂಗೂನ್‌ ಜಪಾನಿಯರ ಬಾಂಬ್‌ ದಾಳಿಗೆ ತುತ್ತಾಯಿತು ಮತ್ತು ಕಲ್ಕತ್ತಾವು ಜಪಾನಿಯ ದಂಗೆಯಿಂದ ಸಂಪೂರ್ಣ ನಿರ್ನಾಮವಾಗಬಹುದೆಂಬ ಭಯಕ್ಕೆ ಒಳಗಾಯಿತು. ಆ ಸಂದರ್ಭದಲ್ಲಿ ಡಾ.ರಾಯ್‌ ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ವಿಶ್ವವಿದ್ಯಾಲಯದಲ್ಲಿ ಕಲಿಸಲು ಮತ್ತು ಕಲಿಯಲು ತೊಂದರೆಯಾಗದಂತೆ ಮಾಡುವ ಉದ್ದೇಶದಿಂದ ವೈಮಾನಿಕ ದಾಳಿಗಳಿಂದ ರಕ್ಷಿಸಿಕೊಳ್ಳಬಲ್ಲ ಮೇಲ್ಚಾವಣಿಗಳನ್ನು ರೂಪಿಸುವಂತೆ ಯೋಜನೆಯನ್ನು ಹಾಕಿಕೊಟ್ಟರು. ಇಂತಹ ಮಹತ್ತರವಾದ ಸಾಧನೆಯನ್ನು ಗುರುತಿಸಿ ೧೯೪೪ರಲ್ಲಿ ಡಾಕ್ಟರೇಟ್‌ ಆಪ್‌ ಸೈನ್ಸ್‌ ಪದವಿಯನ್ನು ನೀಡಿ ಪುರಸ್ಕರಿಸಲಾಯಿತು.

*ಡಾ.ರಾಯ್‌ ಯುವಕರೇ ದೇಶವನ್ನು ರೂಪಿಸಬಲ್ಲವರಾಗಿದ್ದಾರೆ ಎಂಬುದನ್ನು ನಂಬಿದ್ದರು. ಯುವಕರು ಹಿಂದಿನದನ್ನು ಅನುಸರಿಸುತ್ತಾ ಕುಳ್ಳದೇ ಮತ್ತು ದೊಂಬಿ ಗಲಾಟೆಗಳಲ್ಲಿ ಪಾಲ್ಗೊಳ್ಳದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತಾಗಬೇಕೆಂದು ಆಶಿಸುತ್ತಿದ್ದರು.

*ಡಿಸೆಂಬರ್‌ ೧೫, ೧೯೫೬ರಲ್ಲಿ ಲಕ್ನೋ ವಿಶ್ವವಿದ್ಯಾಲಯದಲ್ಲಿ ಸಭೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು "ನನ್ನ ಯುವ ಮಿತ್ರರೇ, ನೀವು ಸ್ವತಂತ್ರ- ಹೋರಾಟದ ಸೈನಿಕರಾಗಿದ್ದೀರಿ. ಹೋರಾಟವು ಬೇಡಿಕೆಗಾಗಿ, ಹೆದರಿಗೆ, ಕೀಳರಿಮೆ ಮತ್ತು ಹತಾಶೆಗಳನ್ನು ಹೋಗಲಾಡಿಸುವುದಕ್ಕಾಗಿದೆ. ಪರಿಶ್ರವಿಲ್ಲದೇ ಫಲವಿಲ್ಲ, ದೇಶಕ್ಕಾಗಿ ಸ್ವಾರ್ಥವನ್ನು ತ್ಯಜಿಸಿ ಹೋರಾಡೊಣ, ನೀವು ದೃಢವಾದ ವಿಶ್ವಾಸ ಮತ್ತು ದೈರ್ಯದಿಂದ ಮುನ್ನುಗ್ಗುತ್ತಿರೆಂದು ನಂಬಿದ್ದೇನೆ..." ಎಂದು ಹೇಳಿದ್ದಾರೆ.

*ಡಾ.ರಾಯ್‌ ಗಾಂಧೀಜಿಯವರ ಮಿತ್ರರೂ ಮತ್ತು ವೈದ್ಯರೂ ಆಗಿದ್ದರು. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯವರು ೧೯೩೩ರಲ್ಲಿ ಪೂನಾದಲ್ಲಿ ಪರ್ಣಕುಟಿವಿನ್‌ನಲ್ಲಿ ಚಿಕಿತ್ಸೆಗೊಳಗಾಗುತ್ತಿದ್ದಾಗ ಡಾ. ರಾಯ್‌ ಅವರೇ ಅವರನ್ನು ಆರೈಕೆ ಮಾಡುತ್ತಿದ್ದರು. ಆದರೆ ಗಾಂಧೀಜಿಯವರು ಆ ಔಷಧಗಳು ವಿದೇಶದಲ್ಲಿ ತಯಾರಾದವುಗಳಾಗಿದ್ದರಿಂದ ತೆಗೆದುಕೊಳ್ಳಲು ನಿರಾಕರಿಸಿದರು. ಗಾಂಧೀಜಿಯವರು ಡಾ.ರಾಯ್‌ ಅವರನ್ನುದ್ದೇಶಿಸಿ
" ಡಾ.ರಾಯ್‌ ಅವರೇ ನಾನೇಕೆ ನಿಮ್ಮ ಸೇವೆಯನ್ನು ಸ್ವೀಕರಿಸಬೇಕು?
ನನ್ನ ದೇಶವಾಸಿಗಳಾದ ನಾಲ್ಕು ದಶಲಕ್ಷ ಜನರಿಗೆ ನಿಮ್ಮಿಂದ ಉಚಿತವಾಗಿ ಸೇವೆ ನೀಡಲು ಸಾಧ್ಯವೇ?" ಎಂದು ಕೇಳಿದರು. ಅದಕ್ಕೆ ಡಾ. ರಾಯ್‌ ಅವರು ಉತ್ತರಿಸುತ್ತಾ"
ಇಲ್ಲ ಗಾಂಧೀಜಿಯವರೇ ನಾನು ಮೋಹನದಾಸ ಕರಮಚಂದ ಗಾಂಧಿಯನ್ನು ಉಪಚರಿಸಲು ಬರಲಿಲ್ಲ. ಮತ್ತು ನನ್ನಿಂದ ನಾಲ್ಕು ದಶಲಕ್ಷ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಸಾಧ್ಯವೂ ಇಲ್ಲ. ಆದರೆ ನಾನು ಬಂದಿರುವುದು ನಾಲ್ಕು ದಶಲಕ್ಷ ಜನರ ಮುಖಂಡನನ್ನು ಉಪಚರಿಸಲು ಬಂದಿದ್ದೇನಷ್ಟೇ" ಎಂದು ನುಡಿದರು. ಗಾಂಧೀಜಿ ಮರುಮಾತಾಡದೇ ಔಷಧವನ್ನು ತೆಗೆದುಕೊಳ್ಳಲೇಬೇಕಾಯಿತು.

*ಡಾ.ರಾಯ್‌ ಅವರು ೧೯೨೫ರಲ್ಲಿ ರಾಜಕೀಯವನ್ನು ಪ್ರವೇಶಿಸಿದರು. ಬಂಗಾಳದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಾರಕ್‌ಪುರ ಕ್ಷೇತ್ರದಲ್ಲಿ ಅಲೆದಾಡಿದರು ಮತ್ತು ನಡೆದ ಚುನಾವಣೆಯಲ್ಲಿ ಬಂಗಾಳದ ಅತ್ಯಂತ ಹಿರಿಯ "ಗ್ರ್ಯಾಂಡ್ ಓಲ್ಡ್ ಮ್ಯಾನ್ ಆಫ್ ಬೆಂಗಾಲ್," ಎಂಬ ಖ್ಯಾತಿಯ ಸುರೇಂದ್ರನಾಥ ಬ್ಯಾನರ್ಜಿ ಅವರನ್ನು ಸೋಲಿಸಿದರು.

* ಪಕ್ಷೇತರವಾಗಿ ನಿಂತಿದ್ದರೂ ಕೂಡ ಸ್ವರಾಜ್‌ ಪಾರ್ಟಿ
(ಕಾಂಗ್ರೆಸ್‌ ನ ಒಂದು ಅಂಗಪಕ್ಷ)ದಿಂದ ಬೆಂಬಲಿಸಲ್ಪಟ್ಟವರಾಗಿದ್ದರು.

* ೧೯೨೫ನಂತರ  ರಾಯ್‌ ಅವರು ಹೂಗ್ಲಿ ನದಿಯಲ್ಲಿ ನಡೆಯುತ್ತಿರುವ ಮಾಲಿನ್ಯಗಳು ಮತ್ತು ಮುಂದಿನ ದಿನಗಳಲ್ಲಿ ಅದನ್ನು ತಡೆಗಟ್ಟುವ ವಿಧಾನಗಳನ್ನು ಮಂಡಿಸಿದರು.

*ಡಾ.ರಾಯ್‌ ಅವರು ಆಲ್‌ ಇಂಡಿಯಾ ಕಾಂಗ್ರೆಸ್‌ ಕಮಿಟಿಗೆ ೧೯೨೮ರಲ್ಲಿ ಆಯ್ಕೆಯಾದರು. ಅವರು ಮೇಲ್ದರ್ಜೆಗೆ ಹೋಗಬೇಕೆಂಬ ಪ್ರಯತ್ನ ಅಥವಾ ವಿವಾದಗಳಿಂದ ದೂರವೇ ಉಳಿದರು.

*೧೯೨೯ರಲ್ಲಿ ಡಾ.ರಾಯ್‌ ಅವರು ಬಂಗಾಳದಲ್ಲಿ ಸಾಮಾಜಿಕ ಕ್ರಾಂತಿಯೊಂದನ್ನು ಮಾಡಿದರು ಮತ್ತು ೧೯೩೦ರಲ್ಲಿ ಪಂಡಿತ್‌ ಮೊತಿಲಾನ್‌ ನೆಹರುರವರು (CWC) ಕಾರ್ಯಕಾರಿ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿದರು. ಸಿ.ಡಬ್ಲೂ.ಸಿ.ಯು ವಿಧಾನಮಂಡಳವನ್ನು ಕಾನೂನು ಬಾಹಿರವೆಂದು ಜರಿಯಿತು ಮತ್ತು ಇತರ ಸದಸ್ಯರ ಜೊತೆಯಲ್ಲಿಯೇ ಡಾ.ರಾಯ್‌ ಅವರು ೨೬ ಅಗಸ್ಟ್‌ ೧೯೩೦ರಂದು ಬಂದನಕ್ಕೊಳಗಾಗಿ ಸೆಂಟ್ರಲ್‌ ಅಲಿಪುರ್‌ ಕಾರಾಗೃಹಕ್ಕೆ ತಳ್ಳಲ್ಪಟ್ಟರು.

*೧೯೩೧ರಲ್ಲಿ ನಡೆದ ದಂಡಿ ಸತ್ಯಾಗ್ರಹದಲ್ಲಿ ಕಲ್ಕತ್ತಾ ಸಂಘಟನೆಯ ಹಲವಾರು ಕಾರ್ಯಕರ್ತರು ಜೈಲು ಸೇರಿದರು. ಕಾಂಗ್ರೆಸ್‌ ಡಾ.ರಾಯ್‌ ಅವರನ್ನು ಜೈಲಿಗೆ ಹೋಗದೇ ಹೊರಗುಳಿದು ಸಂಘದ ಕಾರ್ಯಗಳನ್ನು ನೋಡಿಕೊಳ್ಳುವಂತೆ ಸೂಚಿಸಿತು. ಅವರು ೧೯೩೦–೩೧ರಲ್ಲಿ ಊರ ಪ್ರಮುಖರಾಗಿ ಕಾರ್ಯ ನಿರ್ವಹಿಸಿದರು ಮತ್ತು ೧೯೩೩ರಲ್ಲಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರು. ಇವರ ಆಳ್ವಿಕೆಯಲ್ಲಿ ಸಂಘಟನೆಯು ಉಚಿತ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ತೆ, ಉತ್ತಮ ರಸ್ತೆ ಸೌಲಭ್ಯ, ವಿದ್ಯುತ್‌ ವ್ಯವಸ್ತೆ, ಮತ್ತು ನೀರು ಸರಬರಾಜುಗಳನ್ನು ಉತ್ತಮಗೊಳಿಸಿತು. ಅವರು ಆಸ್ಪತ್ರೆಗಳಿಗೆ ಮತ್ತು ಉಳಿದ ಸೇವಾ ಉದ್ದೇಶಗಳಿಗೆ ಮಾಡಬೇಕಾದ ಹಣದ ಹಂಚಿಕೆಯ ಯೋಜನೆಗಳನ್ನು ರೂಪಿಸುತ್ತಿದ್ದರು ಮತ್ತು ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
**** **** **** **** **
ಸ್ವಾತಂತ್ರ್ಯ್ಯದ ನಂತರ

*ಕಾಂಗ್ರೆಸ್‌ ಪಾರ್ಟಿಯು ಡಾ.ರಾಯ್‌ ಅವರ ಹೆಸರನ್ನು ಬಂಗಾಳದ ಮುಖ್ಯಮಂತ್ರಿ ಹುದ್ದೆಗೆ ಶಿಫಾರಸು ಮಾಡಿತು. ಡಾ.ರಾಯ್‌ ಅವರು ತಮ್ಮ ವೃತ್ತಿಯಲ್ಲೇ ಮುಂದುವರಿಯಲು ಆಶಿಸುತ್ತಿದ್ದರು. ಆದರೆ ಗಾಂಧೀಜಿಯವರ ಸಲಹೆಯ ಮೇರೆಗೆ ಜನವರಿ ೨೩, ೧೯೪೮ರಂದು ಅವರು ತಮ್ಮ ಹುದ್ದೆಯನ್ನಲಂಕರಿಸಿದರು. ಬಂಗಾಳದಲ್ಲಿ ಆ ಸಂದರ್ಭದಲ್ಲಿ ಕೋಮುಗಲಭೆಗಳು, ಆಹಾರ ಕೊರತೆ, ನಿರುದ್ಯೋಗ, ಮತ್ತು ಪೂರ್ವ ಪಾಕಿಸ್ತಾನದಿಂದ ವಲಸೆ ಬರುತ್ತಿರುವ ನಿರಾಶ್ರಿತರ ಸಮಸ್ಯೆಗಳಿಂದ ತುಂಬಿ ಹೋಗಿತ್ತು. ಡಾ.ರಾಯ್‌ ಅವರು ತಮ್ಮ ಪಕ್ಷದಲ್ಲಿ ಏಕತೆ ಮತ್ತು ಶಿಸ್ತನ್ನು ತಂದರು. ನಂತರ ಶಿಸ್ತಿನಿಂದ ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸುತ್ತಾ ಸಾಗಿದರು. ಕೇವಲ ಮೂರೇ ವರ್ಷದಲ್ಲಿ ಕಾನೂನು ಮತ್ತು ಶಿಸ್ತುಗಳು ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳದೇ ಅವರ ಆಳ್ವಿಕೆಯಲ್ಲಿ ಜನರು ಸಕ್ರಿಯವಾಗಿ ಮತ್ತು ಸಂಯಮದಿಂದ ವರ್ತಿಸುವಂತೆ ಮಾಡುತ್ತೇನೆ ಎಂದು ಜನರಿಗೆ ಭರವಸೆ ನೀಡಿದರು.

*ದೇಶವು ಅವರನ್ನು ಫೆಬ್ರುವರಿ ೪, ೧೯೬೧ರಲ್ಲಿ ಭಾರತ ರತ್ನ ಎಂದು ಪುರಸ್ಕರಿಸಿತು.
*ಜುಲೈ ೧, ೧೯೬೨ ರಂದು ಬೆಳಿಗ್ಗೆ ತಮ್ಮ ರೋಗಿಗಳನ್ನು ಶುಶ್ರುಷೆ ಮಾಡಿದ ನಂತರ ರಾಜ್ಯದ ಎಲ್ಲ ಜವಾಬ್ದಾರಿಗಳನ್ನು ಕಳಚಿಕೊಂಡು "ಬ್ರಹ್ಮೋ ಗೀತ್‌"ದ ಪ್ರತಿಯನ್ನು ಓದುತ್ತಾ ಅದರಲ್ಲಿರುವ ಶಾಂತಿ ಸಂದೇಶವನ್ನು ಪಠಿಸತೊಡಗಿದರು. ಅದಾದ ಹನ್ನೊಂದು ಗಂಟೆಯಲ್ಲಿ ಡಾ.ರಾಯ್‌ ಅವರು ಇಹಲೋಕವನ್ನು ತ್ಯಜಿಸಿದರು. ಅವರು ಅವರ ಸಂಸಾರಕ್ಕಾಗಿ ತನ್ನ ತಾಯಿಯ ಹೆಸರಾದ ಅಘೋರಕಾಮಿನಿ ದೇವಿ ಹೆಸರಿನ ಆಸ್ಪತ್ರೆಯನ್ನು ಬಿಟ್ಟು ಹೋಗಿದ್ದಾರೆ.
*೧೯೭೬ರಲ್ಲಿ ವೈದ್ಯಕೀಯ, ರಾಜಕೀಯ, ವಿಜ್ಞಾನ, ಮನಶಾಸ್ತ್ರ, ಸಾಹಿತ್ಯ, ಮತ್ತು ಕಲೆಗಳಲ್ಲಿ ಸಾಧನೆ ತೋರಿದವರಿಗಾಗಿ ಬಿ.ಸಿ.ರಾಯ್‌ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಕಟಿಸಲಾಯಿತು.
*೧೯೬೭ರಲ್ಲಿ ನವದೆಹಲಿಯಲ್ಲಿ ಡಾ.ಬಿ.ಸಿ.ರಾಯ್‌ ಮೆಮೊರಿಯಲ್‌ ಲೈಬ್ರರಿ ಮತ್ತು ಚಿಕ್ಕ ಮಕ್ಕಳಿಗಾಗಿನ ಓದುವ ಕೊಟಡಿಯನ್ನು ಚಿಲ್ಡ್ರನ್ಸ್‌ ಬುಕ್‌ ಟ್ರಸ್ಟ್‌ನಡಿಯಲ್ಲಿ ಪ್ರಾರಂಭಮಾಡಲಾಯಿತು.
🌗🌗gkmani2u🌗🌗