- ಭಾರತದ 2ನೇ ಪ್ರಧಾನ ಮಂತ್ರಿಯಾದ ಇವರು ಉತ್ತರಪ್ರದೇಶದ ಮೊಘಲ್ ಸಾರಾಯ್ ಯಲ್ಲಿ 1904 ಅಕ್ಟೋಬರ್ 2ರಂದು ಜನಿಸಿದರು, ಮರಣ 11 ಜನವರಿ 1966
- 1952ರಲ್ಲಿ AICC ಯ ಕಾರ್ಯದರ್ಶಿಯಾಗಿ ನೇಮಕಗೊಂಡರು
- 1955ರಲ್ಲಿ ಅರಿಯಳೂರು ಬಳಿ ಆದ ರೈಲು ದುರಂತದ ತರುವಾಯ ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು
- 1964ರಲ್ಲಿ ಜವಹರಲಾಲ್ ನೆಹರುರವರ ಮರಣದ ನಂತರ (ಗುಲ್ಜಾರಿಲಾಲ್ ನಂದಾ ಹಂಗಾಮಿ ಪ್ರಧಾನಿಯ ನಂತರ) ರಾಷ್ಟ್ರದ ಪ್ರಧಾನ ಮಂತ್ರಿಯಾದರು
- 1965ರಲ್ಲಿ ಭಾರತೀಯ ಉಗ್ರಾಣ ನಿಗಮ ಆರಂಭಿಸಿದರು
- 1965ರಲ್ಲಿ ದುರ್ಗಾಪುರ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ನಿರ್ಮಿಸಿದರು
- *ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೊಷಿಸಿದರು
- 1966ರಲ್ಲಿ ಹಸಿರು ಕ್ರಾಂತಿಯನ್ನು ಆರಂಭಿಸಿದರು
- 1965ರಲ್ಲಿ ಪಾಕಿಸ್ತಾನದೊಂದಿಗೆ ಯುದ್ದ ಮಾಡಿ ಆ ರಾಷ್ಟ್ರವನ್ನು ಸಂಪೂರ್ಣವಾಗಿ ಸೋಲಿಸಿದರು. 22 ದಿನ ನಡೆದ ಈ ಯುದ್ದದ ಕೊನೆಗೆ 1966ರಲ್ಲಿ ರಷ್ಯಾ ದೇಶದ ತಾಷ್ಕೆಂಟ್ ನಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು. ಇದಕ್ಕೆ ಸಹಿ ಹಾಕಿದ ಪಾಕಿಸ್ತಾನ ಪ್ರಧಾನಿ ಅಯೂಬ್ ಖಾನ್ . ಈ ಘಟನೆಗೆ ಸಾಕ್ಷಿಯಾದ ರಷ್ಯಾದ ಪ್ರಧಾನಿ ಅಲೆಕ್ಸೈ ನಿಕೊಲಯೆವಿಚ್ ಕೊಸಜಿನ್
- ಇವರ ಉದ್ಘೋಷ ವಾಕ್ಯ “ಜೈ ಜವಾನ್ ಜೈ ಕಿಸಾನ್”
- ಮೇಡಂ ಕ್ಯೂರಿ ಬರೆದ ಗ್ರಂಥವನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಿದರು.
- 1926ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತ್ತು
good information
ReplyDelete